Wisdom - Chapter 1
Holy Bible

1 : ಪೊಡವಿಯ ಪಾಲಕರೇ, ನ್ಯಾಯ ನೀತಿಯನ್ನು ಪ್ರೀತಿಸಿರಿ ಯಥಾರ್ಥಚಿತ್ತರಾಗಿ ಸರ್ವೇಶ್ವರನನ್ನು ಧ್ಯಾನಿಸಿರಿ ನಿಷ್ಕಪಟ ಮನಸ್ಸಿನಿಂದ ಆತನನ್ನು ಅರಸಿರಿ.
2 : ಸರ್ವೇಶ್ವರನು ದರ್ಶನವೀಯುವುದು ತನ್ನಲ್ಲಿ ಅಪನಂಬಿಕೆ ಪಡದವರಿಗೆ ಸರ್ವೇಶ್ವರನನ್ನು ಅರಿತುಕೊಂಡವರು ಅವರನ್ನು ಗುರಿಪಡಿಸರು ಪರೀಕ್ಷೆಗೆ.
3 : ದುರಾಲೋಚನೆಗಳು ಮಾನವನನ್ನು ದೂರಮಾಡುತ್ತವೆ ದೇವರಿಂದ ದೇವರನ್ನು ಪರೀಕ್ಷಿಸಲೆತ್ನಿಸುವವನನ್ನು ಹುಚ್ಚನನ್ನಾಗಿಸುತ್ತದೆ ಆತನ ಶಕ್ತಿ ಸಾಮಥ್ರ್ಯ.
4 : ಸುಜ್ಞಾನ ಪ್ರವೇಶಿಸದು ಕಪಟಾತ್ಮವನ್ನು ಪಾಪಾಧೀನವಾದ ಹೃದಯದಲ್ಲಿ ಅದು ತಂಗದು.
5 : ಸುಶಿಕ್ಷಿತವಾದಾ ನಿರ್ಮಲ ಆತ್ಮ ಮೋಸದೆಡೆ ನಿಲ್ಲದು ಅವಿವೇಕ ಆಲೋಚನೆಗಳಿಂದದು ಓಡಿಹೋಗುವುದು ಅನ್ಯಾಯವು ಸಮೀಪಿಸಿದಾಗ ಅದು ಅಸಹ್ಯಪಡುವುದು.
6 : ಸುಜ್ಞಾನವೆಂಬುದು ಮಾನವನನ್ನು ಸ್ನೇಹಿಸುವ ಚೈತನ್ಯವು ಆದರೆ ದೇವದೂಷಣೆ ಆಡುವವರನ್ನು ಅದು ದಂಡಿಸದೆ ಬಿಡದು. ಏಕೆಂದರೆ ಅಂತರಾಲೋಚನೆಗಳಿಗೆ ದೇವರೇ ಸಾಕ್ಷಿ ಆತ ಹೃದಯಗಳನ್ನೂ ವೀಕ್ಷಿಸುತ್ತಾನೆ ಗಮನಿಸಿ ನಾಲಿಗೆ ಆಡುವುದನ್ನು ಅರ್ಥಮಾಡಿಕೊಳ್ಳುತ್ತಾನೆ ಚೆನ್ನಾಗಿ.
7 : ಸರ್ವೇಶ್ವರನ ಚೈತನ್ಯ ವಿಶ್ವವನ್ನು ತುಂಬಿದೆ ಸಮಸ್ತವನ್ನು ಒಟ್ಟಿಗೆ ಹಿಡಿದಿರುವ ಅದಕ್ಕೆ ಪ್ರತಿಯೊಂದೂ ತಿಳಿದಿದೆ.
8 : ಎಂದೇ ಅನ್ಯಾಯ ನುಡಿವವನು ಬಾರದೆಹೋಗನು ಸುಜ್ಞಾನದ ಲಕ್ಷ್ಯಕೆ ಅಂಥವನನು ದಂಡಿಸದೆ ಬಿಡದು ನ್ಯಾಯನೀತಿಯು ಅಪರಾಧವೆತ್ತಿ ತೋರುವ ಕಾಲಕೆ.
9 : ದೇವಭಕ್ತಿಯಿಲ್ಲದವನ ಆಲೋಚನೆಗಳನ್ನು ಪರೀಕ್ಷಿಸಲಾಗುವುದು ಅವನ ಹೇಳಿಕೆಗಳ ವರದಿ ಸರ್ವೇಶ್ವರನನ್ನು ಮುಟ್ಟುವುದು ಅವನ ಅಕ್ರಮಗಳಿಗೆ ತಕ್ಕ ದಂಡನೆ ವಿಧಿಸಲಾಗುವುದು.
10 : ಎಲ್ಲವೂ ಕೇಳಿಸುತ್ತದೆ ಸರ್ವೇಶ್ವರನ ಸೂಕ್ಷ್ಮವಾದ ಕಿವಿಗೆ ಗೊಣಗುಟ್ಟುವ ಪ್ರತಿಯೊಂದು ಸದ್ದೂ ಕೇಳಿಸದಿರದು ಅದಕ್ಕೆ.
11 : ಮರೆಯಲ್ಲಿ ಆಡಿದ ಮಾತು ಪರಿಣಾಮವಿಲ್ಲದೆ ಇರದು ಹುಸಿಯಾಡುವ ಬಾಯಿ ನಾಶಕ್ಕೆ ಒಯ್ಯದೆ ಇರದು. ಆದ್ದರಿಂದ ವ್ಯರ್ಥವಾದ ಗೊಣಗಾಟದ ಬಗ್ಗೆ ಎಚ್ಚರಿಕೆ! ಸುಳ್ಳು ಆಪಾದನೆ ಮಾಡದಂತೆ ಎಚ್ಚರವಹಿಸಲಿ ನಾಲಿಗೆ ! ಮರಣಕ್ಕೆ ಕಾರಣ ದೇವರಲ್ಲ
12 : ಅಕ್ರಮ ಜೀವನದಿಂದ ಮರಣಕ್ಕೀಡಾಗಬೇಡ ಸ್ವಕ್ರಿಯೆಗಳಿಂದ ವಿನಾಶ ಬರಮಾಡಿಕೊಳ್ಳಬೇಡ.
13 : ಏಕೆಂದರೆ ದೇವರು ಉಂಟುಮಾಡಿಲ್ಲ ಮರಣವನ್ನು ಆತ ನೋಡಿ ಹಿಗ್ಗುವವನಲ್ಲ ಜೀವಿಗಳ ಸಾವನ್ನು.
14 : ಅಸ್ತಿತ್ವದಲ್ಲಿರಲೆಂದೇ ದೇವ ಸೃಷ್ಟಿಸಿದನು ಸಮಸ್ತವನ್ನು ಸೃಷ್ಟಿಗಳಲ್ಲಿದೆ ಆರೋಗ್ಯ, ಅವುಗಳಲಿಲ್ಲ ಮಾರಕ ವಿಷಯ ಅಧೋಲೋಕಕ್ಕೆ ಈ ಲೋಕದ ಮೇಲಿಲ್ಲ ಅಧಿಕಾರವು.
15 : ಅಂತ್ಯವೆಂಬುದಿಲ್ಲ ನ್ಯಾಯನೀತಿಗೆ.
16 : ತಮ್ಮ ನಡೆನುಡಿಗಳಿಂದಲೇ ಮರಣ ತಂದುಕೊಂಡರು ದುರುಳರು ಗೆಳೆಯನೋ ಎಂಬಂತೆ ಅದನ್ನು ಕೈಮಾಡಿ ಕರೆದುಕೊಂಡರು ಅದರೊಡನೆ ಸಂಧಾನ ಮಾಡಿಕೊಂಡರು, ಅದರ ಮಿತ್ರರಾಗಲು ಅರ್ಹರವರು.

Holydivine